ಸಂವಿಧಾನದ ಬುನಾದಿಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದವರು ಸೋಮನಾಥ್ ಚಟರ್ಜಿ

ಮಾಜಿ ಲೋಕಸಭಾದ್ಯಕ್ಷರೂ, ಹತ್ತು ಬಾರಿ ಲೋಕಸಭಾ ಸದಸ್ಯರೂ ಆಗಿದ್ದ ಸೋಮನಾಥ ಚಟರ್ಜಿಯವರು ಆಗಸ್ಟ್ 13ರ ಬೆಳಿಗ್ಯೆ ಕೊಲ್ಕತಾದಲ್ಲಿ ನಿಧನರಾಗಿದ್ದಾರೆ. ಅವರ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸುತ್ತ ಸಿಪಿಐ(ಎಂ) ಪೊಲಿಟ್‌ಬ್ಯುರೊ ಅವರೊಬ್ಬ ಹಿರಿಯ ಸಂಸದೀಯ ಪಟು, ಭಾರತೀಯ ಸಂವಿಧಾನದ ಬುನಾದಿಗಳನ್ನು, ಅದರಲ್ಲೂ ಮುಖ್ಯವಾಗಿ ಅದರ ಜಾತ್ಯತೀತ ಪ್ರಜಾಸತ್ತಾತ್ಮಕ ಬುನಾದಿಗಳನ್ನು ಮತ್ತು ಒಕ್ಕೂಟತತ್ವವನ್ನು ಕಾಯ್ದುಕೊಳ್ಳುವಲ್ಲಿ ಒಂದು ಮಹತ್ವದ ಪಾತ್ರವಹಿಸಿದರು ಎಂದು ಹೇಳಿದೆ.

ವೃತ್ತಿಯಿಂದ ಒಬ್ಬ ಪ್ರತಿಷ್ಠಿತ ವಕೀಲರಾಗಿದ್ದ ಅವರು ಕಾರ್ಮಿಕ ವರ್ಗಕ್ಕೆ ಮತ್ತು ವಂಚಿತರಿಗೆ ನ್ಯಾಯ ಸಿಗುವಂತಾಗಲು ಅವರ ವ್ಯಾಜ್ಯಗಳನ್ನು ಕೈಗೆತ್ತಿಕೊಂಡಿದ್ದರು ಎಂದು ನೆನಪಿಸಿಕೊಳ್ಳುತ್ತ ಪೊಲಿಟ್‌ಬ್ಯುರೊ ಅವರ ಪತ್ನಿ ಮತ್ತು ಮಕ್ಕಳಿಗೆ ಹಾರ್ದಿಕ ಸಂತಾಪಗಳನ್ನು ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *