ಬಿಹಾರ ಸಿಪಿಐ(ಎಂ) ಶಾಸಕರ ಮೇಲೆ ಮಾರಣಾಂತಿಕ ಹಲ್ಲೆ

ajaykumar1 30 05 2021ಬಿಹಾರ ವಿಧಾನಸಭೆಯಲ್ಲಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಶಾಸಕಾಂಗ ಪಕ್ಷದ ಮುಖಂಡರೂ, ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯರೂ ಅಗಿರುವ ಅಜಯ್‍ ಕುಮಾರ್ ಮೇಲೆ ಮೇ 29ರಂದು ಸಮಸ್ತಿಪುರದಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ. ಇದನ್ನು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಖಂಡಿಸಿದೆ. ಇದು ಕಳೆದ ಕೆಲವು ವಾರಗಳಲ್ಲಿ ಇಂತಹ ಎರಡನೇ ಹಲ್ಲೆ.

ಹಲ್ಲೆಕೋರರನ್ನು ತಕ್ಷಣವೇ ಪತ್ತೆಹಚ್ಚಿ ಹಿಡಿಯಬೇಕು ಮತ್ತು ಅವರ ವಿರುದ್ಧ ಶಿಕ್ಷಾಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಪೊಲಿಟ್‍ ಬ್ಯುರೊ ಅಜಯ್‍ ಕುಮಾರ್ ಅವರಿಗೆ ಸಾಕಷ್ಟು ಭದ್ರತೆಯನ್ನು ಒದಗಿಸಬೇಕು ಮತ್ತು ಇಂತಹ ಘಟನೆಗಳು ಮತ್ತೆ-ಮತ್ತೆ ಏಕೆ ನಡೆಯುತ್ತದೆ ಎಂಬುದಕ್ಕೆ ಒಂದು ತನಿಖೆಯನ್ನು ನಡೆಸಬೇಕು ಎಂದು ಹೇಳಿದೆ.

Leave a Reply

Your email address will not be published. Required fields are marked *