ಕೊಲೆ ಬೆದರಿಕೆ ಬಗ್ಗೆ ಕ್ಷಿಪ್ರ ಕ್ರಮ ಕೈಗೊಳ್ಳಿ – ಕರ್ನಾಟಕ ಸರಕಾರಕ್ಕೆ ಆಗ್ರಹ

ಕರ್ನಾಟಕದಲ್ಲಿ ಹಲವು ಪ್ರತ್ಠಿತ ವ್ಯಕ್ತಿಗಳಿಗೆ ಕೊಲೆ ಬೆದರಿಕೆ ಕಳಿಸಿರುವುದನ್ನು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸಿದೆ.

ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಮಾಡಿದ ಧಾಳಿಯಾಗಿದೆ. ಈಚೆಗೆ ಈ ಬೆದರಿಕೆಯ ಪತ್ರವನ್ನು ಶ್ರೀ ನಿಜಗುಣಾನಂದಸ್ವಾಮಿ ಇವರ ಹೆಸರಿಗೆ ಬರೆಯಲಾಗಿದೆ.

ಇದೊಂದು ಅನಾಮದೇಯ ಪತ್ರವಾಗಿದೆ. ಈ ಕೊಲೆ ಬೆದರಿಕೆ ಇರುವ ಪಟ್ಟಿಯಲ್ಲಿ ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯರಾಗಿರುವ ಕಾಂ.ಬೃಂದಾ ಕಾರಟ್, ಚಿತ್ರನಟರಾಗಿರುವ ಪ್ರಕಾಶ್ ರಾಜ್, ಸ್ವಾಮಿ ನಿಜಗುಣಾನಂದ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತಿತರ 11 ಮಂದಿಯ ಹೆಸರುಗಳಿವೆ.

ಇದೊಂದು ಗಂಭೀರ ವಿಷಯ, ಕರ್ನಾಟಕ ರಾಜ್ಯ ಸರಕಾರ ತಕ್ಷಣವೇ ಈ ಬೆದರಿಕೆ ಪತ್ರದ ಹಿಂದೆ ಇರುವವರು ಯಾರು ಎಂಬುದನ್ನು ತನಿಖೆ ಮಾಡಬೇಕು ಮತ್ತು ಕ್ಷಿಪ್ರ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಆಗ್ರಹಿಸಿದೆ.

ಈ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪ ರವರನ್ನು ಸಿಪಿಐ(ಎಂ) ರಾಜ್ಯ ಸಮಿತಿಯು ಆಗ್ರಹಿಸಿದೆ.

ಯು. ಬಸವರಾಜ, ಕಾರ್ಯದರ್ಶಿ

Leave a Reply

Your email address will not be published. Required fields are marked *