ಕೇರಳ ಪಂಚಾಯತು ಚುನಾವಣೆಗಳಲ್ಲಿ ಎಲ್.ಡಿ.ಎಫ್.ಗೆ ದೊಡ್ಡ ವಿಜಯ

ನಕಾರಾತ್ಮಕ ಪ್ರಚಾರಕ್ಕೆ ಜನತೆಯಿಂದ  ತಕ್ಕ ಉತ್ತರ:  ಸಿಪಿಐ(ಎಂ) ಪೊಲಿಟ್ ಬ್ಯುರೊ ಅಭಿನಂದನೆ

ಕೇರಳದ ಜನತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಎಡ ಪ್ರಜಾಪ್ರಭುತ್ವ ರಂಗ(ಎಲ್.ಡಿ.ಎಫ್.)ಕ್ಕೆ ಒಂದು ದೊಡ್ಡ ವಿಜಯವನ್ನು ಕೊಟ್ಟಿದ್ದಾರೆ ಎನ್ನುತ್ತ ಸಿಪಿಐ(ಎಂ) ಪೊಲಿಟ್ ಬ್ಯುರೊ ಅದಕ್ಕಾಗಿ ಅವರಿಗೆ ಅಭಿನಂದನೆಗಳನ್ನು ಮತ್ತು ಅಭಿವಂದನೆಗಳನ್ನು ಸಲ್ಲಿಸಿದೆ. ಎಲ್ಲಾ ಮೂರು ಸ್ತರಗಳ ಪಂಚಾಯತುಗಳಲ್ಲಿ ಎಲ್.ಡಿ.ಎಫ್. ದೊಡ್ಡ ಬಹುಮತಗಳನ್ನು ಗಳಿಸಿದೆ. ಅದು ಆರು ಮಹಾನಗರಪಾಲಿಕೆಗಳಲ್ಲಿ ಐದರಲ್ಲಿ ಗೆಲುವು ಸಾಧಿಸಿದೆ, 14 ಜಿಲ್ಲಾ ಪಂಚಾಯತುಗಳಲ್ಲಿ 11ರಲ್ಲಿ ಮುಂದಿದೆ.

ಕೇರಳದ ಜನತೆ ಎಲ್.ಡಿ.ಎಫ್. ಸರಕಾರದ ಕಾರ್ಯನಿರ್ವಹಣೆಗೆ ತಮ್ಮ ಮಂಜೂರಾತಿಯನ್ನು ದಾಖಲಿಸಿದ್ದಾರೆ. 2018ರ ಗಂಭೀರ ಪ್ರವಾಹ ಮತ್ತು ಕೊವಿಡ್ ಮಹಾಸೋಂಕನ್ನು ನಿಭಾಯಿಸುವಲ್ಲಿ ರಾಜ್ಯ ಸರಕಾರ ಮತ್ತು ಸ್ಥಳೀಯ ಸಂಸ್ಥೆಗಳು ಮಾಡಿರುವ ಕೆಲಸಕ್ಕೆ ಜನಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಅದು ಈ ಚುನಾವಣಾ ವಿಜಯವನ್ನು ವಿಶ್ಲೇಷಿಸಿದೆ.

ಕಾಂಗ್ರೆಸ್ ನೇತೃತ್ವದ ಯು.ಡಿ.ಎಫ್. ಮತ್ತು ಬಿಜೆಪಿ ಗಳು ಎಲ್.ಡಿ.ಎಫ್. ಸರಕಾರ ಮತ್ತು ಅದರ ನಾಯಕತ್ವದ ವಿರುದ್ಧ ಆಧಾರಹೀನ ಆಪಾದನೆಗಳನ್ನು ಹಾಕಿ ಮಾಡಿದ್ದ ನಕಾರಾತ್ಮಕ ಪ್ರಚಾರ, ಅದಕ್ಕೆ ಬಲಪಂಥೀಯ  ಮಾಧ್ಯಮಗಳ ಬೆಂಬಲ ಮತ್ತು ಬಿಜೆಪಿ ಕೇಂದ್ರ ಸರಕಾರ ಅದನ್ನು ನೀತಿಬಾಹಿರವಾಗಿ ಬಳಸಿಕೊಂಡುದಕ್ಕೆ ಕೇರಳದ ಜನತೆ ತಕ್ಕ ಉತ್ತರ ನೀಡಿದ್ದಾರೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *