ಬೈಂದೂರು:ಸಿಪಿಐ(ಎಂ) ಕಚೇರಿ ಉದ್ಘಾಟನೆ

WhatsApp Image 2021-03-15 at 2.33.01 PMಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದ ಉಡುಪಿ ಜಿಲ್ಲೆ ಬೈಂದೂರು ವಲಯ ಸಮಿತಿ ಕಚೇರಿಯನ್ನು ಬೈಂದೂರು ರಾಷ್ಟ್ರೀಯ ಹೆದ್ದಾರಿ ಬಳಿ ಆರಂಭಿಸಲಾಗಿದೆ. ಸಿಪಿಐ(ಎಂ) ಬೈಂದೂರು ವಲಯ ಕಾಯ೯ದರ್ಶಿ ಸುರೇಶ್ ಕಲ್ಲಾಗರ್ ಕಚೇರಿ ಉದ್ಘಾಟನೆಯನ್ನು ನೆರವೇರಿಸಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ರಾಜಕೀಯ, ಪ್ರಜಾಪ್ರಭುತ್ವ ನಮ್ಮ ಉಸಿರು ಕಾರ್ಮಿಕ ವರ್ಗಕ್ಕೆ ತನ್ನದೇ ಆದ ರಾಜಕೀಯ ಪಕ್ಷ ಅಗತ್ಯವಾಗಿಬೇಕೆಂದು ಎಂದು ಹೇಳಿದರು.

ಸಿಪಿಐ(ಎಂ)ಪಕ್ಷದ ಜಿಲ್ಲಾ ಕಾಯ೯ದಶಿ೯ಮಂಡಳಿ ಸದಸ್ಯ ವೆಂಕಟೇಶ ಕೋಣಿ  ಪ್ರಾಸ್ತಾವಿಕ ಭಾಷಣ ಮಾತನಾಡಿ, ಬೈಂದೂರು ತಾಲೂಕಿನಲ್ಲಿ ದುಡಿಯುವ ವಗ೯ವಾದ ರೈತ,ಕೃಷಿ ಕೂಲಿ,ಕಾಮಿ೯ಕರ ವಗ೯ ರಾಜಕೀಯ ಹೋರಾಟ ಚಟುವಟಿಕೆಯ ಕೇಂದ್ರವಾಗಿ ಈ ಕಚೇರಿ ಬೆಳೆದು ಬರಲಿ ಎಂದು ಶುಭ ಹಾರೈಸಿದರು.

ಕಾರ್ಮಿಕ ಸಂಘಟನೆಯ ತಾಲೂಕು ಸಂಚಾಲಕ ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಡಿವೈಎಫ್‌ಐ ಮಾಜಿ ಮುಖಂಡ ಬಿ.ಶ್ರೀನಿವಾಸ ಹಳವಳ್ಳಿ, ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಹೆಬ್ಬಾರ್ ಕಾಲ್ತೋಡು, ಇವರು ಸಿಪಿಐ(ಎಂ) ಪಕ್ಷದ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು ಅಲ್ಲದೆ, ಶುಭಕೋರಿ ಮಾತನಾಡಿದರು.

ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯ ರಾಜೀವ ಪಡುಕೋಣೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ(ಎಂ)ಮುಖಂಡ ಕಂಭದಕೋಣೆ ರಾಮ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

Leave a Reply

Your email address will not be published. Required fields are marked *