ಸೆ.25ರ ‘ಭಾರತ್ ಬಂದ್‌’ನ ಸಂಯುಕ್ತ ಕಿಸಾನ್ ಮೋರ್ಚಾ ಕರೆಗೆ ಬೆಂಬಲ ನೀಡಲು ಜನತೆಗೆ ಎಡಪಕ್ಷಗಳ ಕರೆ

ಕೃಷಿ ಕಾಯ್ದೆಗಳ ರದ್ಧತಿ ಮತ್ತು ಕನಿಷ್ಟ ಬೆಂಬಲ ಬೆಲೆಗೆ ಒಂದು ಕಾನೂನಾತ್ಮಕ ಖಾತ್ರಿಗಾಗಿ ಚಾರಿತ್ರಿಕ ರೈತ ಹೋರಾಟ 10ನೇ ತಿಂಗಳಲ್ಲಿ ಮುಂದುವರೆಯುತ್ತಿದೆ. ಮೋದಿ ಸರಕಾರ ಈಗಲೂ ತನ್ನ ಮೊಂಡುತನವನ್ನು ಮುಂದುವರೆಸುತ್ತಿದೆ, ಹೋರಾಟ ನಡೆಸುತ್ತಿರುವ ರೈತರೊಂದಿಗೆ ಮಾತುಕತೆ ನಡೆಸಲು ನಿರಾಕರಿಸುತ್ತಿದೆ ಎಂದು ಐದು ಎಡಪಕ್ಷಗಳು ಖೇದ ಪಡಿಸಿವೆ. ಮೋದಿ ಸರಕಾರದ ಈ ಮೊಂಡುತನವನ್ನು ಖಂಡಿಸುತ್ತ ಕೃಷಿ ಕಾಯ್ದೆಗಳನ್ನು ತಕ್ಷಣವೇ ರದ್ದು ಮಾಡಬೇಕು, ಕನಿಷ್ಟ ಬೆಂಬಲ ಬೆಲೆ ಖಾತ್ರಿಯನ್ನು ಜಾರಿಗೊಳಿಸಬೇಕು, ರಾಷ್ಟ್ರೀಯ ಆಸ್ತಿ ನಗದೀಕರಣ ಕ್ರಮಸರಣಿಯನ್ನು ರದ್ದು ಮಾಡಬೇಕು ಹಾಗೂ ಕಾರ್ಮಿಕ ಸಂಹಿತೆಗಳನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿವೆ.

ಈ ಭಾರತ್ ಬಂದ್‌ನ ಕರೆಯ ಯಶಸ್ಸಿಗೆ ಶ್ರಮಿಸಬೇಕು ಎಂದು ತಮ್ಮ ಎಲ್ಲ ಘಟಕಗಳಿಗೆ ಕರೆ ನೀಡಿರುವ ಈ ಐದು ಎಡಪಕ್ಷಗಳು, ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಭಾರತ ಕಮ್ಯೂನಿಸ್ಟ್‌ ಪಕ್ಷ-ಸಿಪಿಐ, ಅಖಿಲ ಭಾರತ ಫಾರ್ವರ್ಡ್ ಬ್ಲಾಕ್_ಎಐಎಫ್‌ಬಿ, ರೆವ್ಯೂಲೂಷನರಿ ಸೋಷಲಿಸ್ಟ್‌ ಪಾರ್ಟಿ-ಆರ್‌ಎಸ್‌ಪಿ ಮತ್ತು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ-ಲೆನಿನ್‌ವಾದಿ)-ಸಿಪಿಐ(ಎಂಎಲ್)-ಲಿಬರೇಷನ್, ಭಾರತ್ ಬಂದ್ ನ್ನು ಬೆಂಬಲಿಸುವಂತೆ  ಜನತೆಗೆ ಮನವಿ ಮಾಡಿವೆ.

Leave a Reply

Your email address will not be published. Required fields are marked *