ಸಾಮರಸ್ಯ ಕಾಯ್ದುಕೊಂಡು, ಭವಿಷ್ಯದ ಸವಾಲು ಎದುರಿಸಲು ಐಕ್ಯತೆಯಿಂದ ಬನ್ನಿ

ಚುನಾವಣಾ ಫಲಿತಾಂಶಗಳ ಹಿನ್ನೆಲೆಯಲ್ಲಿ ಜನತೆಗೆ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಕರೆ

17ನೇ ಲೋಕಸಭಾ ಚುನಾವಣೆಗಳ ಫಲಿತಾಂಶಗಳ ಬಗ್ಗೆ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಈ ಕೆಳಗಿನ ಹೇಳಿಕೆಯನ್ನು ನೀಡಿದೆ:

ಭಾರತದ ಮತದಾರರು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಪರವಾಗಿ ಒಂದು ನಿರ್ಣಾಯಕ ತೀರ್ಪನ್ನು ನೀಡಿದ್ದಾರೆ.

ಸಿಪಿಐ(ಎಂ) ಈ ಚುನಾವಣೆಗಳಲ್ಲಿ ಒಂದು ತೀವ್ರ ಹಿನ್ನಡೆಯನ್ನು ಅನುಭವಿಸಿದೆ. ನಾವು ಇದರ ಕಾರಣಗಳ ಬಗ್ಗೆ ಆತ್ಮಾವಲೋಕನ ಮಾಡುತ್ತೇವೆ ಮತ್ತು ಭವಿಷ್ಯಕ್ಕೆ ಸರಿಯಾದ ಪಾಟಗಳನ್ನು ಕಲಿಯುತ್ತೇವೆ.

ಸಿಪಿಐ(ಎಂ) ತನ್ನ ಅಭ್ಯರ್ಥಿಗಳಿಗೆ ಮತನೀಡಿರುವ ಎಲ್ಲ ಜನರಿಗೂ ಧನ್ಯವಾದಗಳನ್ನು ಸಲ್ಲಿಸುತ್ತದೆ. ಈ ಚುನಾವಣೆಗಳಲ್ಲಿ ಸಿಪಿಐ(ಎಂ)ನ ಸಂದೇಶವನ್ನು ಜನತೆಯ ಬಳಿ ಒಯ್ಯಲು ದುಡಿದಿರುವ ಎಲ್ಲರಿಗೂ ಪೊಲಿಟ್‍ ಬ್ಯುರೊ ನಮನಗಳನ್ನು ಸಲ್ಲಿಸುತ್ತದೆ.

ನಮ್ಮ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯದ ರಕ್ಷಣೆ, ಸಂವಿಧಾನಿಕ   ಅಧಿಕಾರಗಳನ್ನು ಹೊಂದಿರುವ ಸಂಸ್ಥೆಗಳು, ಜನತೆಯ ಹಕ್ಕುಗಳು ಮತ್ತು ಜೀವನಾಧಾರದ ಪ್ರಶ್ನೆಗಳಿಗೆ ಸಂಬಂಧಪಟ್ಟಂತೆ ಬಹುದೊಡ್ಡ ಸವಾಲುಗಳು ಮುಂದೆ ಇವೆ.

ಸಾಮರಸ್ಯವನ್ನು ಕಾಯ್ದುಕೊಳ್ಳಬೇಕು ಮತ್ತು ಭವಿಷ್ಯದಲ್ಲಿ ಈ ಸವಾಲುಗಳನ್ನು ಎದುರಿಸಲು ಐಕ್ಯತೆಯಿಂದ ಮುಂದೆ ಬರಬೇಕು ಎಂದು ಜನತೆಗೆ ಪೊಲಿಟ್‍ ಬ್ಯುರೊ ಕರೆ ನೀಡುತ್ತದೆ.

Leave a Reply

Your email address will not be published. Required fields are marked *