ಗಿರೀಶ ಕಾರ್ನಾಡ್ ನಿಧನ: ಆಧುನಿಕ ಭಾರತಕ್ಕೆ ಒಂದು ದೊಡ್ಡ ನಷ್ಟ

ಗಿರೀಶ ಕಾರ್ನಾಡ್ ಸಮಕಾಲೀನ ಭಾರತದ ಸೃಜನಶೀಲ ಮನಸ್ಸುಗಳಲ್ಲಿ ಒಬ್ಬರಾಗಿದ್ದರು ಎಂದು ಅವರ ನಿಧನಕ್ಕೆ ಹಾರ್ದಿಕ ಸಂತಾಪಗಳನ್ನು ವ್ಯಕ್ತಪಡಿಸುತ್ತ ಸಿಪಿಐ(ಎಂ) ಪೊಲಿಟ್‍ ಬ್ಯುರೊ ವರ್ಣಿಸಿದೆ.

ಒಬ್ಬ ಅಪರೂಪದ ಲೇಖಕ, ನಿರ್ದೇಶಕ, ರಂಗ ವ್ಯಕ್ತಿ ಮತ್ತು ನಟನಾಗಿದ್ದ ಅವರು ಸಾಮಾಜಿಕ ಉದ್ಧಾರ ಮತ್ತು ಜಾತ್ಯತೀತತೆಗೆ ಅವಿರತ ಬದ್ಧತೆಯನ್ನು ಎತ್ತಿಹಿಡಿದವರು. ಅವರ ಸಾವು ಆಧುನಿಕ ಭಾರತಕ್ಕೆ ಒಂದು ದೊಡ್ಡ ನಷ್ಟ ಎಂದಿರುವ ಪೊಲಿಟ್‍ ಬ್ಯುರೊ ಸಿಪಿಐ(ಎಂ)ನ ಹಾರ್ದಿಕ ಸಂತಾಪಗಳನ್ನು ಅವರ ಪುತ್ರ ರಘು ಕಾರ್ನಾಡ್‍ ಮತ್ತು ಅವರ ಕುಟುಂಬದ ಇತರ ಸದಸ್ಯರಿಗೆ ತಿಳಿಸಿದೆ.

Leave a Reply

Your email address will not be published. Required fields are marked *