ಅಂಫನ್ ಚಂಡಮಾರುತ- ಒಂದು ರಾಷ್ಟ್ರೀಯ ವಿಪತ್ತು

ಅಂಫನ್ ಚಂಡಮಾರುತ ಪಶ್ಚಿಮ ಬಂಗಾಲ ಮತ್ತು ಒಡಿಶಾದಲ್ಲಿ ವಿಧ್ವಂಸಕಾರೀ ತೊಂದರೆಗಳನ್ನು ಉಂಟು ಮಾಡಿದೆ ಎನ್ನುತ್ತ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಇದರಲ್ಲಿ ಪ್ರಾಣ ಕಳಕೊಂಡಿರುವವರ ಕುಟುಂಬಗಳಿಗೆ ಆಳವಾದ ಸಂತಾಪಗಳನ್ನು ತಿಳಿಸಿದೆ.

ಈ ಕ್ಷಣದಲ್ಲಿ ಪರಿಹಾರ ಮತ್ತು ಮರುವಸತಿಗೆ ಆದ್ಯತೆ ಸಿಗಬೇಕು. ದೇಶ ಮತ್ತು ಜನತೆ ಈಗಾಗಲೆ ಕೊವಿಡ್‍ ಮಹಾಮಾರಿಯ ವಿರುದ್ಧ ಬದುಕುಳಿಯುವ ಒಂದು ಕಠೋರ ಹೋರಾಟದಲ್ಲಿ ತೊಡಗಿದೆ. ಈ ಎರಡೂ ರಾಜ್ಯಗಳಲ್ಲಿ ಜನಗಳಿಗೆ ದೇಶದ ಜನಗಳು ಮತ್ತು ಸರಕಾರಗಳಿಂದ ಬೆಂಬಲ ಮತ್ತು ಸೌಹಾರ್ದ ಬೇಕಾಗಿದೆ.

ಕೇಂದ್ರ ಸರಕಾರ ತಕ್ಷಣವೇ ಇದನ್ನು ಒಂದು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು, ಮತ್ತು ಈ ಅನಾಹುತದ ಪರಿಣಾಮಗಳನ್ನು ಎದುರಿಸಬೇಕಾಗಿರುವ ರಾಜ್ಯಗಳಿಗೆ ಗಮನಾರ್ಹ ಪ್ರಮಾಣದಲ್ಲಿ ನೆರವಾಗಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *