ಶ್ರೀನಗರಕ್ಕೆ ಆಗಸ್ಟ್ 9ರಂದು ಯೆಚುರಿ ಭೇಟಿ

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಆಗಸ್ಟ್ 8ರಂದು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರಿಗೆ ಈ ಕೆಳಗಿನ ಪತ್ರ ಬರೆದಿದ್ದಾರೆ:

“ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ) ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ಸಕ್ರಿಯ ಘಟಕವನ್ನು ಹೊಂದಿದೆ.  ಈಗ ವಿಸರ್ಜನೆಗೊಂಡಿರುವ ರಾಜ್ಯ ವಿಧಾನಸಭೆಯಲ್ಲಿ ಒಬ್ಬ ಸದಸ್ಯರನ್ನು, ಮಹಮ್ಮದ್ ಯುಸುಫ್ ತರಿಗಾಮಿ, ಹೊಂದಿದೆ.

ಒಂದು ರಾಷ್ಟ್ರೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಯೂಸುಫ್ ತರಿಗಾಮಿಯವರನ್ನು(ಅವರು ಅನಾರೋಗ್ಯದಿಂದಿದ್ದಾರೆ ಎಂದು ನನಗೆ ಮಾಹಿತಿ ಬಂದಿದೆ) ಮತ್ತು  ನನ್ನ ಪಕ್ಷದ ಇತರ ಸದಸ್ಯರನ್ನು ಭೇಟಿ ಮಾಡ ಬಯಸುತ್ತೇನೆ. ಆಗಸ್ಟ್ ೯ ರ ಬೆಳಿಗ್ಗೆ ಅವರನ್ನು ಭೇಟಿಯಾಗಲು ಶ್ರೀನಗರ ತಲುಪಬೇಕೆಂದಿದ್ದೇನೆ.

ನನ್ನ ಪಕ್ಷದ ಒಬ್ಬ ಮುಖಂಡನಾಗಿ ನನ್ನ ಹೊಣೆಯನ್ನು ನಿಭಾಯಿಸುವಲ್ಲಿ ಆಡಳಿತದ ಯಾವ ತೊಡರುಗಳನ್ನೂ ನಿರ್ಮಿಸುವುದಿಲ್ಲ ಎಂದು ಆಶಿಸುತ್ತೇನೆ.”

Leave a Reply

Your email address will not be published. Required fields are marked *