ಪ್ಯಾಲೆಸ್ತೀನಿಯನ್ನರ ಮೇಲೆ ಇಸ್ರೇಲಿ ದಾಳಿ: ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡನೆ

ಇಸ್ರೇಲ್ ಗಾಝಾ ಪಟ್ಟಿಯ ಮೇಲೆ ನಡೆಸಿರುವ ವಿಮಾನ ದಾಳಿಗಳಿಂದ ಹಲವಾರು ಪ್ಯಾಲೆಸ್ತೀನಿ ನಾಗರಿಕರು ಸಾವನ್ನಪ್ಪಿದ್ದಾರೆ. ಇದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ.

ಇಸ್ರೇಲ್ ಪೂರ್ವ ಜೆರುಸಲೇಂನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳವತ್ತ ಸಾಗುತ್ತಿದೆ, ಯೆಹೂದಿಗಳನ್ನು ನೆಲೆಗೊಳಿಸಲಿಕ್ಕೆ ಅವಕಾಶ ಮಾಡಿಕೊಡಲು ಶೇಖ್ ಜರ‍್ರಾಹದ ಸುತ್ತಮುತ್ತಲ ನಿವಾಸಿಗಳನ್ನು ಬಲವಂತದಿಂದ  ಓಡಿಸುವ ಪ್ರಯತ್ನಗಳನ್ನು ಪ್ರತಿಭಟಿಸುತ್ತಿದ್ದ ಪ್ಯಾಲೆಸ್ತೇನಿಯನ್ನರ ಮೇಲೆ ಅದು ದಾಳಿ ಮಾಡಿದೆ. ಇಸ್ರೇಲಿ ಪಡೆಗಳು ಮುಸ್ಲಿಮರ ಮೂರನೇ ಪವಿತ್ರ ಸ್ಥಳವೆನಿಸಿರುವ ಅಲ್ ಅಕ್ಸಾ ಮಸೀದಿಯ ಆವರಣದೊಳಕ್ಕೆ ನುಗ್ಗಿ ರಂಝಾನ್ ತಿಂಗಳ ಪ್ರಾರ್ಥನೆಯಲ್ಲಿ ತೊಡಗಿದ್ದವರನ್ನು ಗಾಯಗೊಳಿಸಿವೆ.

SHEIKH JARRAH-SAVE1ಇಸ್ರೇಲಿ ಚುನಾವಣೆಗಳಲ್ಲಿ ಬಹುಮತ ಗಳಿಸಲು ಮತ್ತೆ-ಮತ್ತೆ ವಿಫಲವಾಗಿರುವ ನೆತನ್ಯಾಹು, ಕ್ಷುಲ್ಲಕ ರಾಜಕೀಯ ಪ್ರಯೋಜನಕ್ಕಾಗಿ ಮತ್ತು ಕೊವಿಡ್ ಮಹಾಸೋಂಕಿನ ಉಬ್ಬರದಿಂದ ಜನಗಳನ್ನು ರಕ್ಷಿಸಲು ಸರಕಾರ ವಿಫಲವಾಗಿರುವುದನ್ನು ಮುಚ್ಚಿಕೊಳ್ಳಲು ಈ ದಾಳಿಗಳನ್ನು ಹರಿಯಬಿಟ್ಟಿದ್ದಾರೆ. ಇಸ್ರೇಲಿನಲ್ಲಿರುವ ಪ್ಯಾಲೆಸ್ತೇನಿಯನ್ನರ ವಿರುದ್ಧ ಲಸಿಕೆ ಹಾಕುವಲ್ಲಿಯೂ ತಾರತಮ್ಯ ತೋರಲಾಗುತ್ತಿದೆ, ಇದು ಇಸ್ರೇಲ್ ಅನುಸರಿಸುತ್ತಿರುವ ಜನಾಂಗದ್ವೇಷದ ಧೋರಣೆಯನ್ನು ಬಿಂಬಿಸುತ್ತದೆ.

ಇಸ್ರೇಲಿನ ಈ ಕೃತ್ಯಗಳು ಮಾನವ ಹಕ್ಕುಗಳ ಮತ್ತು ವಿಶ್ವಸಂಸ್ಥೆ ಅಂಗೀಕರಿಸಿರುವ ಹಲವು ನಿರ್ಣಯಗಳ ಉಲ್ಲಂಘನೆಯಾಗಿವೆ  ಎಂದಿರುವ ಸಿಪಿಐ(ಎಂ) ಇವನ್ನು ಖಂಡಿಸಿದೆ ಮತ್ತು ಭಾರತ ಸರಕಾರ ಹಾಗೂ ಭಾರತೀಯ ಜನತೆ ಪ್ಯಾಲೆಸ್ತೀನಿನ ಜನತೆಗೆ ತಮ್ಮ ಬೆಂಬಲದ ದನಿಯೆತ್ತಬೇಕು ಎಂದು ಕರೆ ನೀಡಿದೆ.

Leave a Reply

Your email address will not be published. Required fields are marked *