ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ)ನ ಅವಿಭಜಿತ ಬಂಗಾರಪೇಟೆ ತಾಲ್ಲೂಕು ಸಮಿತಿಯ ಮತ್ತು ಕೆಜಿಎಫ್ ಘಟಕದ ಮಾಜಿ ಸದಸ್ಯರಾದ ಕಾಂ. ಎಸ್. ರಾಮಸ್ವಾಮಿ (76 ವರ್ಷ) ಅವರು ಜೂನ್ 2, 2021 ರಂದು ನಿಧನರಾದರು.
ಉತ್ತಮ ವಾಗ್ಮಿಯಾಗಿದ್ದ ಕಾಂ. ರಾಮಸ್ವಾಮಿ ಅವರು ಕೆಜಿಎಫ್ ಚಿನ್ನದ ಗಣಿ ಕಾರ್ಮಿಕರ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಲವಾರು ಧೀರೋದಾತ್ತ ಹೋರಾಟಗಳಲ್ಲಿ ಭಾಗವಹಿಸಿದ್ದರು.
ಸಿಐಟಿಯು ಸಂಯೋಜಿತ ಚಿನ್ನದ ಗಣಿ ಕಾರ್ಮಿಕ ಸಂಘದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಮೃತ ಸಂಗಾತಿಗೆ ಪಕ್ಷದ ಕೋಲಾರ ಜಿಲ್ಲಾ ಸಮಿತಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದೆ. ದುಃಖಿತ ಕುಟುಂಬದ ಸದಸ್ಯರಿಗೆ ಸಂತಾಪಗಳನ್ನು ಸೂಚಿಸುತ್ತದೆ.